ಸಕಲೇಶಪುರ: ಕಾರ್ಯನಿರತ ಲೈನ್ ಮ್ಯಾನ್‍ಗಳ ಮೇಲೆ ಹಲ್ಲೆ; ದೂರು

Update: 2018-11-19 15:25 GMT

ಸಕಲೇಶಪುರ,ನ.19: ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಲೈನ್ ಮ್ಯಾನ್ ಗಳ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ಜಾನೆಕೇರೆ ಗ್ರಾಮದಲ್ಲಿ ನಡೆದಿದೆ.

ಹಲ್ಲೆಗೆ ಒಳಗಾಗಿರುವ ಪಟ್ಟಣದ ನಿವಾಸಿಗಳಾದ ಕೀರ್ತಿರಾಜ್ ಮತ್ತು ಪ್ರಶಾಂತ್ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಜಾನೆಕೇರೆ ಗ್ರಾಮದಲ್ಲಿ ವಿದ್ಯುತ್ ಬಿಲ್ಲು ವಿತರಣೆ ಹಾಗೂ ವಿದ್ಯುತ್ ಶುಲ್ಕ ಬಾಕಿ ಇರುವ ಸ್ಥಾವರಗಳ ವಿದ್ಯುತ್ ಸರಬರಾಜನ್ನು ನಿಲುಗಡೆ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮದ ನಿವಾಸಿಯಾದ ಸುರೇಶ್ ಬಿನ್ ಮಲ್ಲಯ್ಯ ಎಂಬುವರು ಅನಧಿಕೃತವಾಗಿ ತಮ್ಮ ಮನೆಗೆ ವಿದ್ಯುತ್ ಸಂಪರ್ಕವನ್ನು ಹಾಕಿಕೊಂಡಿರುವುದು ಕಂಡುಬಂದಿತು. ಈ ಸಂಬಂಧ ವಿಚಾರಿಸಲು ಅವರ ಮನೆಯ ಬಳಿ ಹೋದಾಗ ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ನಮಗೆ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News