ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲು

Update: 2018-11-20 18:46 GMT

ದಾವಣಗೆರೆ,ನ.20: ಜಿಲ್ಲಾಡಳಿತದ ಆದೇಶ ಮೀರಿ ನದಿಗೆ ನುಗ್ಗಿ ಸಾರ್ವಜನಿಕರ ಜೊತೆ ಮರಳು ತೆಗೆದ ಹಿನ್ನೆಲೆಯಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಎಸ್ಪಿ ಮಾಹಿತಿ ನೀಡಿದ್ದು, ಎಂಪಿಆರ್ ಅವರೊಂದಿಗೆ ಒಟ್ಟು 33 ಜನರ ಮೇಲೆ 379, 143, 149 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಕಾನೂನು ಉಲ್ಲಂಘನೆ ಮಾಡದಂತೆ ಮನವಿ ಮಾಡಿದರೂ ನದಿಪಾತ್ರದಲ್ಲಿ ಮರಳು ತೆಗೆಯಲಾಗಿದೆ. ಶಾಸಕರ ಬಂಧನದ ಕುರಿತು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News