ಕೊಪ್ಪ: ಎಚ್1ಎನ್1 ಗೆ ಕಾಂಗ್ರೆಸ್ ಮುಖಂಡ ಬಲಿ

Update: 2018-11-21 12:26 GMT
ಗೋಪಾಲ್ ಭಂಡಾರಿ

ಕೊಪ್ಪ, ನ.21: ಮಹಾಮಾರಿ ಎಚ್1ಎನ್1ಗೆ ತಾಲೂಕಿನ ಮೇಗುಂದ ಹೋಬಳಿ ಶಾಂತಿಗ್ರಾಮದ ಬಿ.ಎಂ.ರಸ್ತೆ ವಾಸಿ ಗೋಪಾಲ್ ಭಂಡಾರಿ (58) ಎಂಬವರು ಬಲಿಯಾಗಿರುವ ಘಟನೆ ಮಂಗಳವಾರ ವರದಿಯಾಗಿದೆ. 

ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಗೋಪಾಲ್ ಭಂಡಾರಿ ತಾಲೂಕು ಕೆಡಿಪಿ ಸದಸ್ಯರಾಗಿದ್ದಾರೆ. 10 ದಿನದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯಪುರ ಸರಕಾರ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಉಲ್ಬಣಗೊಂಡಿದ್ದರಿಂದ ಅವರನ್ನು ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದು, ಭಂಡಾರಿ ನಿಧನಕ್ಕೆ ತಾಲೂಕು ಸಮಾಜದ ಅಧ್ಯಕ್ಷ ಕೆ.ಇ. ನಾಗರಾಜ್, ಶಾಸಕ ಟಿ.ಡಿ. ರಾಜೇಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News