ಸೊರಬ: ಬಾಯಲ್ಲಿ ಸಿಡಿದ ನಾಡ ಬಾಂಬ್; ಹೋರಿಯ ಮುಖ ಛಿದ್ರ
Update: 2018-11-21 18:48 GMT
ಸೊರಬ,ನ.21: ತಾಲ್ಲೂಕಿನ ಹುರುಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಪ್ಲಾಂಟೇಶನ್ ನಲ್ಲಿ ಮೇಯಲು ಹೋಗಿದ್ದ ದನಗಳ ಗುಂಪಿನಲ್ಲಿದ್ದ ಹೋರಿಯೊಂದು ಯಾರೋ ಕಾಡು ಪ್ರಾಣಿಗಳ ಭೇಟೆಯಾಡಲು ಇಟ್ಟಿದ್ದ ನಾಡ ಬಾಂಬ್ ಕಡಿದ ಪರಿಣಾಮ ಹೋರಿಯ ಮುಖ ಛಿದ್ರವಾದ ಘಟನೆ ಬುಧವಾರ ಸಂಜೆ ನಡೆದಿದೆ.
ತಲ್ಲೂರು ಗ್ರಾಮದ ನಾಗರಾಜ್ ಬಿನ್ ಫಕೀರಪ್ಪ ಎಂಬುವವರಿಗೆ ಸೇರಿದ ದನಗಳು ಎಂದಿನಂತೆ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ಪ್ಲಾಂಟೇಷನ್ನಲ್ಲಿ ಮೇಯಲು ಹೋಗಿದ್ದವು. ಈ ಸಂದರ್ಭದಲ್ಲಿ ಯಾರೋ ಕಾಡು ಪ್ರಾಣಿಗಳನ್ನು ಭೇಟೆಯಾಡಲು ರಾತ್ರಿ ಇಟ್ಟಿದ್ದ ನಾಡ ಬಾಂಬ್ನ್ನು ದನಗಳ ಗುಂಪಿನಲ್ಲಿದ್ದ ಹೋರಿಯೊಂದು ಕಡಿದ ಪರಿಣಾಮ ಹೋರಿಯ ಮುಖ ಸಂಪೂರ್ಣ ಛಿದ್ರವಾಗಿದ್ದು, ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.