​ಅಕ್ರಮ ವಲಸಿಗರನ್ನು ಗಡೀಪಾರು ಮಾಡಬೇಕು: ಸೇನಾ ಮುಖ್ಯಸ್ಥ

Update: 2018-11-22 04:00 GMT

ಹೊಸದಿಲ್ಲಿ, ನ. 22: ಅಸ್ಸಾಂನಲ್ಲಿ ವಿವಾದಿತ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಹೆಸರು ನೊಂದಾವಣೆಗೆ ಕ್ಲೇಮ್ ಸಲ್ಲಿಸಲು ಕೇವಲ ಮೂರು ವಾರಗಳು ಬಾಕಿ ಇರುವ ನಡುವೆಯೇ, ಎಲ್ಲ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಅಗತ್ಯವಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

"ಎನ್‌ಆರ್‌ಸಿಗೆ ನನ್ನ ಬೆಂಬಲವಿದೆ. ಇದನ್ನು ವಿರೋಧಿಸುವ ಪಕ್ಷಗಳು ದೇಶದ ಭದ್ರತೆಯನ್ನು ಕಡೆಗಣಿಸುತ್ತಿವೆ" ಎಂದು ಟೈಮ್ಸ್‌ ನೌಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ಈ ಪಕ್ಷಗಳು ಮಾಡುತ್ತಿರುವ ನಕಲಿ ಎನ್‌ಕೌಂಟರ್ ಮತ್ತು ಮಾನವ ಹಕ್ಕು ಉಲ್ಲಂಘನೆ ಆರೋಪಗಳು ಕೂಡಾ ಸುಳ್ಳು ಎಂದು ಪ್ರತಿಪಾದಿಸಿದ್ದಾರೆ.

"ದೇಶವನ್ನು ಅಕ್ರಮವಾಗಿ ಪ್ರವೇಶಿಸಿದವರನ್ನು ಗಡೀಪಾರು ಮಾಡುವುದಕ್ಕೆ ನನ್ನ ಬೆಂಬಲವಿದೆ. ಅವರು ಅಕ್ರಮ ವಲಸಿಗರಾಗಿದ್ದರೆ ಅವರನ್ನು ಗಡೀಪಾರು ಮಾಡಬೇಕು. ಅವರು ಕಾನೂನು ಬದ್ಧ ನಾಗರಿಕರಾಗಿದ್ದರೆ ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಪ್ರಯೋಜನವಾಗುವ ರೀತಿಯಲ್ಲಿ ಈ ಪಟ್ಟಿಯನ್ನು ಪರಿಷ್ಕರಿಸಬೇಕು. ಅದು ರಾಜಕೀಯ ವಿಷಯವಾಗಬಾರದು" ಎಂದು ಅಭಿಪ್ರಾಯಪಟ್ಟರು.

ಅಕ್ರಮ ವಲಸಿಗರು ಮುಂದುವರಿಯಲು ರಾಜಕೀಯ ಪಕ್ಷಗಳು ನೆರವು ನೀಡುತ್ತಿವೆ ಎಂಬ ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News