ಈರುಳ್ಳಿ ಬೆಲೆ ಕುಸಿತ: ಪ್ರಧಾನಿಗೆ ಬಾಗಲಕೋಟೆಯ ರೈತ ಪ್ರಶಾಂತ್ ಟ್ವೀಟ್
Update: 2018-11-22 04:54 GMT
ಬೆಂಗಳೂರು, ನ.22:ಈರುಳ್ಳಿ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಬಗ್ಗೆ ಗಮನ ಹರಿಸುವಂತೆ ಬಾಗಲಕೋಟೆಯ ಬೆನಕಕಟ್ಟಿಯ ರೈತ ಪ್ರಶಾಂತ್ ಎಂಬವರುಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದಾರೆ.
ಈರುಳ್ಳಿ ಬೆಲೆ ಕುಸಿತ ರೈತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ತಿಳಿಸಿರುವ ಪ್ರಶಾಂತ್ ಅವರು ಈರುಳ್ಳಿಬಿತ್ತನೆ , ಬೆಳೆ ಬೆಳೆಯಲು ಖರ್ಚಾದ ಹಣ , ನಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಕನ್ನಡಿಗರು ನಮ್ಮ ಸಮಸ್ಯೆಗೆ ಗಮನ ಹರಿಸಿ ಎಂದು ಪ್ರಶಾಂತ್ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.