ಸಿದ್ದಾಪುರ: ಕರಿಪಾಲ್ ದೇವಸ್ಥಾನ ಟ್ರಸ್ಟ್ ನಿಂದ ಡಾ.ಪಿ.ಸಿ ಹಸೈನಾರ್ ಹಾಜಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ

Update: 2018-11-27 11:53 GMT

ಸಿದ್ದಾಪುರ,ನ.27: ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ, ಸಮಾಜ ಸೇವಕ ಹಾಗೂ ಕಾಫಿ ಬೆಳೆಗಾರ ಸಿದ್ದಾಪುರದ ಡಾ.ಪಿ.ಸಿ ಹಸೈನಾರ್ ಹಾಜಿ ರವರಿಗೆ ಕೇರಳದ ಕಣ್ಣೂರು ಜಿಲ್ಲೆಯ ಕರಪಾಲ್ ದೇವಸ್ಥಾನ ಟ್ರಸ್ಟ್ ವತಿಯಿಂದ ಧಾರ್ಮಿಕ ಹಾಗೂ ಸಮಾಜ ಸೇವೆಯ ಸಾಧನೆಗೆ ರಾಜ್ಯ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದರು.

ಕಣ್ಣೂರು ಜಿಲ್ಲೆಯ ಪೇರಂಬಡವ್ ಕರಿಪಾಲ್ ದೇವಸ್ಥಾನ ಟ್ರಸ್ಟ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಬಿ.ಎಸ್ ಸುನೀಲ್ ಕುಮಾರ್ ಅವರು ಡಾ.ಪಿ.ಸಿ.ಹಸೈನಾರ್ ಹಾಜಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಕೇರಳ ಹಾಗೂ ಕರ್ನಾಟಕದಲ್ಲಿ ಕಳೆದ ಐವತ್ತು ವರ್ಷಗಳಿಂದಲೂ ನಿರಂತರವಾಗಿ ರಾಜಕೀಯ, ಧಾರ್ಮಿಕ, ಸಮಾಜ ಸೇವೆ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಎಲ್ಲಾ ವರ್ಗದವರೊಂದಿಗೆ ಸೌಹಾರ್ದವಾಗಿ ಗುರುತಿಸಿಕೊಂಡು ಸಾಧನೆ ಮಾಡಿರುವ ಡಾ.ಪಿ.ಸಿ.ಹಸೈನಾರ್ ಹಾಜಿಯವರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಮತ್ತೋರ್ವ ಸಮಾಜ ಸೇವಕ ಸೋಮನ್ ನಂಬಿಯಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು 

ಈ ಸಂದರ್ಭ ಕರಿಪಾಲ್ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಶಿವದಾಸ್, ತಳಿಪರಂಬು ಡಿವೈಎಸ್ಪಿ ವೇಣುಗೊಪಾಲ್, ದುಬೈ ಶೇಕ್ ಪಬ್ಲಿಕ್ ರಿಲೇಷನ್ ಡೈರೆಕ್ಟರ್ ಕೃಷ್ಣಾ ಕೊಡಿಚೆರಿ, ಕಣ್ಣೂರು ಮಾಲ್ ಮ್ಯಾನೇಜಿಂಗ್ ಪಾರ್ಟ್ನರ್ ಶಿವರಾಜು, ಆರೋಗ್ಯ ಇಲಾಖೆ ಅಧಿಕಾರಿ ದೇವದಾಸ್, ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡೈರೆಕ್ಟರ್ ಎಂ.ಪಿ ಹಸನ್ ಕುನ್ನಿ, ಕಣ್ಣೂರು ಸರ್ವ ಕಲಾ ಸಿಂಡಿಕೇಟ್ ಸದಸ್ಯ ಸಂತೋಷ್ ಕುಮಾರ್, ಪಯ್ಯನೂರು ಆಸ್ಪತ್ರೆಗಳ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಕರಿಪಾಲ್ ಗ್ರಾಮ ಪಂ. ಅಧ್ಯಕ್ಷೆ ಸತ್ಯ ಬಿಂದು, ಕ್ರೈಸ್ತ ಧರ್ಮಗುರು ಫಾದರ್ ಮ್ಯಾಥ್ಯೂ ಮುಲ್ಲಪಳ್ಳಿ, ಸಲೀಂ ವೈನಾಡ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪಿ.ಸಿ ಹಸೈನಾರ್ ಹಾಜಿ ಅವರ ಸಮಾಜಯನ್ನು ಗುರುತಿಸಿ ಇತ್ತೀಚೆಗೆ ಗ್ರೋಬಲ್ ಪೀಸ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ, ಡಾಕ್ಟರೇಟ್ ನೀಡಲಾಗಿದ್ದು, ಚೆನೈನ ರಷ್ಯನ್ ಕಲ್ಚ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸ್ವಾಮಿದೊರೈ ರವರಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News