ಹನೂರು: ಬೇಟೆಗಾರನ ಬಂಧನ; ನಾಡ ಬಂದೂಕು ವಶ

Update: 2018-12-06 18:31 GMT

ಹನೂರು,ಡಿ.6: ಮಲೈಮಹದೇಶ್ವರ ವನ್ಯ ಜೀವಿ ವಲಯ ವ್ಯಾಪ್ತಿಯ ಹನೂರು ಬಫರ್ ವಲಯಕ್ಕೆ ಸೇರಿದ ಪಚ್ಚೆದೂಡ್ಡಿ ಕಾಡಂಚಿನ ಭಾಗದಲ್ಲಿ ಬುಧವಾರ ಮದ್ಯರಾತ್ರಿ ಓರ್ವ ಬೇಟೆಗಾರನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನಂತರ ಆತನಿಂದ ನಾಡ ಬಂದೂಕನ್ನು ವಶ ಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.

ಅಜ್ಜಿಪ್ಪುರ ಗ್ರಾಮದ ಮುನಿಯಪ್ಪ ಬಂಧಿತ ಆರೋಪಿ. ಅರಣ್ಯ ಅಧಿಕಾರಿಗಳು ಬುಧವಾರ ಮದ್ಯರಾತ್ರಿ ಗಸ್ತಿನಲ್ಲಿದ್ದಾಗ ಮುನಿಯಪ್ಪನನ್ನು ಬಂಧಿಸಿ, ನಾಡ ಬಂದೂಕು ಸೇರಿ ಬ್ಯಾಟರಿ ಟಾರ್ಚ್‍ಗಳನ್ನು ವಶಪಡಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ದಾಳಿ ಸಂದರ್ಭ ಉಪವಲಯ ಅರಣ್ಯಾಧಿಕಾರಿ ಪ್ರಸಾದ್, ಸ್ಟಾಲನ್ ಉಪವಲಯ ಅರಣ್ಯ ವೀಕ್ಷಕ ಮಾಣಿಕ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News