ಬುರೇ ದಿನ್ ಹೋಗಲಿವೆ, ರಾಹುಲ್ ಗಾಂಧಿ ಬರಲಿದ್ದಾರೆ : ಸಿಧು

Update: 2018-12-11 07:58 GMT

ಅಮೃತಸರ, ಡಿ. 11: ಸಹನೆ ಹಾಗು ಪರಿಶ್ರಮದ ಫಲ ಅತ್ಯಂತ ಸಿಹಿಯಾಗಿರುತ್ತದೆ. ಈಗ ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಸಮರ್ಥ ನಾಯಕತ್ವದಲ್ಲಿ ಅದೇ ಫಲ ಕಾಣುತ್ತಿದೆ. 2019 ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿದ್ದಾರೆ ಎಂದು ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ ಹಾಗು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

"ಬುರೇದಿನ್ ಹೋಗಲಿವೆ, ರಾಹುಲ್ ಗಾಂಧಿ ಬರಲಿದ್ದಾರೆ. ಒಂದು ಹೊಸ ಆಶಾಕಿರಣ ದೇಶದಲ್ಲಿ ಮೂಡಿದೆ. ರಾಹುಲ್ ಗಾಂಧಿ ಈಗ ಉದಯಿಸುತ್ತಿರುವ ನಾಯಕ. ಮೋದಿ ಅಸ್ತಮಿಸುತ್ತಿರುವ ನಾಯಕ. ಬಿಜೆಪಿಗೆ ಹೇಳಲು ವಿಷಯಗಳೇ ಇಲ್ಲ. ಅವರು ಕೆಳಗೆ ಬಿದ್ದರೂ ಮೂಗು ಮೇಲೆ ಎಂಬಂತೆ ಈಗ ಮಾತಾಡುತ್ತಾರೆ. ದೇಶದೆಲ್ಲೆಡೆ ಬಿಜೆಪಿ ವಿರುದ್ಧ ಆಕ್ರೋಶವಿದೆ. ಅದು ಈಗ ಎದ್ದು ಕಾಣುತ್ತಿದೆ. ಈಗ ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ದಿಗ್ಗಜ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಇದು ಅತ್ಯುತ್ತಮ ಫಲಿತಾಂಶ ತರುತ್ತಿದೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹೊಸ ಹುರುಪಿನಿಂದ ಕೆಲಸ ಮಾಡಿ ಜಯ ತಂದಿದ್ದಾರೆ. ಬಿಜೆಪಿಯ ವಿಭಜನಕಾರಿ ರಾಜಕೀಯ ಅವರಿಗೆ ಸೋಲು ತಂದಿದೆ." ಎಂದು ಸಿಧು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News