ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಸಿ.ಎನ್.ಬಾಲಕೃಷ್ಣನ್ ನಿಧನ

Update: 2018-12-11 14:39 GMT

ಕೊಚ್ಚಿ,ಡಿ.11: ನ್ಯುಮೋನಿಯಾದಿಂದ ಬಳಲುತ್ತಿದ್ದ ಕೇರಳದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸಿ.ಎನ್.ಬಾಲಕೃಷ್ಣನ್(87) ಅವರು ಸೋಮವಾರ ರಾತ್ರಿ ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಅವರ ಸುದೀರ್ಘ ಕಾಲದ ಒಡನಾಡಿಯಾಗಿದ್ದ ಬಾಲಕೃಷ್ಣನ್ ಅವರು 17 ವರ್ಷಗಳ ಕಾಲ ತ್ರಿಶೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ಸುದೀರ್ಘ ಅವಧಿಗೆ ರಾಜ್ಯ ಕಾಂಗ್ರೆಸ್ನ ಖಜಾಂಚಿಯೂ ಆಗಿದ್ದರು.
2011ರಲ್ಲಿ ಮೊದಲ ಬಾರಿಗೆ ವಡಕ್ಕಂಚೇರಿ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಬಾಲಕೃಷ್ಣನ್ ಉಮ್ಮನ್ ಚಾಂಡಿ ಸರಕಾರದಲ್ಲಿ ಸಹಕಾರ ಮತ್ತು ಖಾದಿ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News