ಅಗಲಿದ ಅಂಬಿಗೆ ಸಂತಾಪ ಸೂಚಿಸದ ಲೋಕಸಭೆ

Update: 2018-12-12 09:09 GMT

ಹೊಸದಿಲ್ಲಿ, ಡಿ.12: ಕೇಂದ್ರದ ಮಾಜಿ ಸಚಿವ , ನಟ ಅಂಬರೀಶ್  ನಿಧನಕ್ಕೆ ಲೋಕಸಭೆ ಸಂತಾಪ ಸೂಚಿಸದೆ  ಅವರನ್ನು ಕಡೆಗಣಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ಅಂಬರೀಶ್ ಹೆಸರು ಇರಲಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಕ್ಷೇಪ ಎತ್ತಿದ್ದರು.

ಈ ಸಂದರ್ಭದಲ್ಲಿ ಲೋಕಸಭೆ  ಸ್ಪೀಕರ್ ಸುಮಿತ್ರಾ ಮಹಾಜನ್  ನಾಳೆ  ಸಂತಾಪ ಸೂಚಕ ನಿರ್ಣಯ ಮಂಡಿಸುವುದಾಗಿ ಸ್ಪಷ್ಟನೆ ನೀಡಿದ್ದರು. ಆದರೆ ಬುಧವಾರವೂ ಅಂಬರೀಶ್ ಗೆ ಲೋಕಸಭೆ ಸಂತಾಪ ಸೂಚಿಸಲಿಲ್ಲ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News