ಅಗಲಿದ ಅಂಬಿಗೆ ಸಂತಾಪ ಸೂಚಿಸದ ಲೋಕಸಭೆ
Update: 2018-12-12 09:09 GMT
ಹೊಸದಿಲ್ಲಿ, ಡಿ.12: ಕೇಂದ್ರದ ಮಾಜಿ ಸಚಿವ , ನಟ ಅಂಬರೀಶ್ ನಿಧನಕ್ಕೆ ಲೋಕಸಭೆ ಸಂತಾಪ ಸೂಚಿಸದೆ ಅವರನ್ನು ಕಡೆಗಣಿಸಿದೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ಅಂಬರೀಶ್ ಹೆಸರು ಇರಲಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆಕ್ಷೇಪ ಎತ್ತಿದ್ದರು.
ಈ ಸಂದರ್ಭದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ನಾಳೆ ಸಂತಾಪ ಸೂಚಕ ನಿರ್ಣಯ ಮಂಡಿಸುವುದಾಗಿ ಸ್ಪಷ್ಟನೆ ನೀಡಿದ್ದರು. ಆದರೆ ಬುಧವಾರವೂ ಅಂಬರೀಶ್ ಗೆ ಲೋಕಸಭೆ ಸಂತಾಪ ಸೂಚಿಸಲಿಲ್ಲ ಎಂದು ತಿಳಿದು ಬಂದಿದೆ.