ಮಂಡ್ಯ: ಜನರಲ್ ಸ್ಟೋರ್ ಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ನಷ್ಟ

Update: 2018-12-14 18:54 GMT

ಮಂಡ್ಯ, ಡಿ.14: ಜನರಲ್ ಸ್ಟೋರ್ ಗೆ ಆಕಸ್ಮಿಕ ಬೆಂಕಿಬಿದ್ದು ಲಕ್ಷಾಂತರ ರೂ. ಮೌಲ್ಯದ ಪದಾರ್ಥಗಳು ನಾಶವಾಗಿರುವ ಘಟನೆ ಮದ್ದೂರು ತಾಲೂಕು ಬೆಸಗರಹಳ್ಳಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಮದ್ದೂರು ತಾಲೂಕು ವಳಗೆರೆಹಳ್ಳಿ ಗ್ರಾಮದ ದಿವಂಗತ ಸಿದ್ದರಾಮಯ್ಯ ಅವರ ಪುತ್ರ ಎಸ್.ಕಿರಣ್‍ಕುಮಾರ್ ಅವರಿಗೆ ಸೇರಿದ ಸ್ಟೋರ್ ಸುಟ್ಟುಹೋಗಿದ್ದು, ಸುಮಾರು 10 ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ.

ಗುರುವಾರ ರಾತ್ರಿ ಎಂದಿನಂತೆ ಕಿರಣ್‍ಕುಮಾರ್ ವ್ಯಾಪಾರ ಮುಗಿಸಿಕೊಂಡು ಜನರಲ್ ಸ್ಟೋರ್ ಗೆ ಬೀಗ ಹಾಕಿ ತೆರಳಿದ ನಂತರ, ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ವಿಷಯ ತಿಳಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು.

ಕಿರಣ್‍ಕುಮಾರ್ ಸಾಲಮಾಡಿ ಜನರಲ್ ಸ್ಟೋರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಘಟನೆಯಿಂದ ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಸರಕಾರ, ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾದ್ಯಕ್ಷ ವಿ.ಸಿ.ಉಮಾ ಶಂಕರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಬೆಸಗರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News