ನಮ್ಮ ರಕ್ತಕ್ಕೆ ಗೌರವ ಸಿಗಲು, ಧರ್ಮ ಉಳಿಯಲು ಮೋದಿ ಪ್ರಧಾನಿ ಆಗಬೇಕು: ಅನಂತಕುಮಾರ್ ಹೆಗಡೆ

Update: 2018-12-25 14:18 GMT

ಬಾಗಲಕೋಟೆ, ಡಿ.25: ನಮ್ಮ ರಕ್ತಕ್ಕೆ ಶತಮಾನಗಳ ಗೌರವ ಸಿಗಲು, ನಮ್ಮ ಧರ್ಮ ಉಳಿಯಲು ಬಿಜೆಪಿ ಗೆಲ್ಲಬೇಕು, ದೇಶದ ಮಣ್ಣಿಗೆ ಗೌರವ ಕೊಡುವ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದು ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಹೇಳಿದ್ದಾರೆ.

ಬಿಜೆಪಿ ಘಟಕದಿಂದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಜಪೇಯಿ ಅವರು ನಮ್ಮ ನಡುವೆ ಇದ್ದು ಹೋದಂತ ಮಹಾನ್ ವ್ಯಕ್ತಿತ್ವದವರು. ಕಪಟ ಗೊತ್ತಿರಲಿಲ್ಲ, ಮೋಸ ಇರಲಿಲ್ಲ. ಸ್ವಚ್ಛ ಸ್ವಭಾವವನ್ನು ಜೀವನ ಪೂರ್ತಿ ಹೊಂದಿದ್ದವರು ಎಂದು ಹೇಳಿದರು.

ಮೋದಿ ಗೆಲುವು ನಮಗಿಂತಲೂ ಇಡೀ ಜಗತ್ತಿಗೆ ಬೇಕಿದೆ. ಜಗತ್ತು ನಮ್ಮನ್ನು ನೋಡುವ ದೃಷ್ಟಿ ಬೇರೆಯೇ ಇದೆ. ವಾಜಪೇಯಿ ಅವರ ಕಾಲದಲ್ಲಿ ಇದು ಆರಂಭ ಆಯಿತು. ಮೋದಿ ಕಾಲದಲ್ಲಿ ಅದು ಹೆಮ್ಮರವಾಗಿದೆ ಎಂದರು.

ಮೊದಲು ನನಗೆ ಈ ರಾಜಕಾರಣ ಹಿಡಿಸಿರಲಿಲ್ಲ. ರಾಜಕಾರಣದ ಒಳಕಿಟಕಿ, ಹೊರಕಿಟಕಿಗಳು ತಿಳಿದಿರಲಿಲ್ಲ. ರಾಜಕೀಯ ಬೇಡ ಅಂತ ರಾಜೀನಾಮೆ ಕೊಟ್ಟಿದ್ದೆ. ಆಗ ವಾಜಪೇಯಿ ಅವರು ನನ್ನ ಕರೆದು ನನಗೆ ತಿಳಿಸಿ ಹೇಳಿದರು. ವಾಜಪೇಯಿ ಅವರು ಒಬ್ಬ ಪ್ರಧಾನಿ ಅಂತಲ್ಲ. ಬಿಜೆಪಿ ನಾಯಕ ಅಂತಲ್ಲ. ವಾಜಪೇಯಿ ಅವರು ಈ ದೇಶ ಕಂಡ ಶ್ರೇಷ್ಠ ವ್ಯಕ್ತಿ. ಅವರನ್ನು ಶಬ್ದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ ಎಂದು ಹೊಗಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News