ಸರಕಾರ ಉರುಳುತ್ತದೆ ಎಂಬ ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ: ಯಡಿಯೂರಪ್ಪ
Update: 2018-12-27 04:58 GMT
ವಿಜಯಪುರ, ಡಿ.27: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ ಇನ್ನು 24 ಗಂಟೆಯಲ್ಲಿ ಉರುಳುತ್ತದೆ. ಎರಡೂ ಪಕ್ಷಗಳ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆಂಬ ಶಾಸಕ ಉಮೇಶ್ ಕತ್ತಿ ಹೇಳಿಕೆಗೂ, ನಮಗೂ ಸಂಬಂಧವಿಲ್ಲ. ಅವರ ಹೇಳಿಕೆ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕಚ್ಚಾಡಿಕೊಂಡು ಸರಕಾರ ತಾನಾಗಿಯೇ ಬಿದ್ದರೆ ಆಗ ಸರಕಾರ ರಚನೆ ಕುರಿತು ಯೋಚಿಸುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಸುಮ್ಮನೇ ಕೂರಲು ನಾವೇನೂ ಸನ್ಯಾಸಿಗಳಲ್ಲ ಎಂದು ಬಿಎಸ್ವೈ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ‘‘ಕಾಂಗ್ರೆಸ್-ಜೆಡಿಎಸ್ನ 15 ಮಂದಿ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ರಾಜ್ಯಸರಕಾರ ಇನ್ನು 24 ಗಂಟೆಯಲ್ಲಿ ಬಿದ್ದುಹೋಗಲಿದೆ’’ ಎಂದು ಹೇಳಿಕೆ ನೀಡಿದ್ದರು. ಕತ್ತಿ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿತ್ತು.