ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಶಿವಮೊಗ್ಗ ಜಿಲ್ಲಾ ಸಮಿತಿಯ ಮಹಾಸಭೆ

Update: 2018-12-28 06:31 GMT

ಶಿವಮೊಗ್ಗ, ಡಿ.28: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಶಿವಮೊಗ್ಗ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯು ಗುರುವಾರ ಮಝ್ಹರುಲ್ ಉಲೂಮ್ ಮದ್ರಸದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಝ್ರತ್ ಮುಫ್ತಿ ಮುಜೀಬುಲ್ಲಾ, ಉಲಮಾಗಳು, ಇಮಾಮ್ಸ್ ಗಳು ಮಸೀದಿ ಮದ್ರಸಗಳಲ್ಲಿ ಧಾರ್ಮಿಕ ವಿಷಯಗಳಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಜವಾಬ್ದಾರಿಯನ್ನು ಪಾಲಿಸಬೇಕು. ಅನ್ಯಾಯ ಅಕ್ರಮಗಳು ಹೆಚ್ಚಾಗುತ್ತಿರುವ ಸಂದರ್ಭಗಳಲ್ಲಿ ಅದರ ವಿರುದ್ಧವಾದ ಹೋರಾಟದ ನಾಯಕತ್ವವನ್ನು ಇಮಾಮ್ ಗಳು ವಹಿಸಿಕೊಳ್ಳಲು ಸಿದ್ಧರಾಗಬೇಕು ಎಂದರು

ಸಭೆಯನ್ನು ಇಮಾಮ್ಸ್ ಕೌನ್ಸಿಲ್ ರಾಜ್ಯ ಪ್ರದಾನ ಕಾರ್ಯದರ್ಶಿ ಮೌಲಾನಾ ಜಾಫರ್ ಸಾದಿಕ್ ಫೈಝಿ ಉದ್ಘಾಟಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆಯನ್ನು ಹಾಫಿಝ್ ಅಸ್ಲಮ್ ಅಸ್ರಫಿ ಮೈಸೂರು ನಡೆಸಿಕೊಟ್ಟರು.

2019-20ರ ಅವದಿಗೆ ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮೌಲಾನಾ ಅಬ್ದುಲ್ ಮತೀನ್, ಉಪಾಧ್ಯಕ್ಷರಾಗಿ ಮೌಲಾನಾ ಝಿಯಾವುಲ್ಲಾ, ಪ್ರಧಾನ ಕಾರ್ಯದರ್ಶಿ ಆಗಿ ಮೌಲಾನಾ ಅಬ್ದುಲ್ ಬಾಸಿತ್, ಕಾರ್ಯದರ್ಶಿಯಾಗಿ ಹಾಫಿಝ್ ಅಝ್ಮತುಲ್ಲಾ, ಕೋಶಾಧಿಕಾರಿಯಾಗಿ ಮೌಲಾನಾ ಕಿಝರುಲ್ಲಾ ಮತ್ತು ಹತ್ತು ಮಂದಿಯನ್ನು ಜಿಲ್ಲಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು

ಮೌಲಾನಾ ಅಬ್ದುಲ್ ಬಾಸಿತ್ ಸ್ವಾಗತಿಸಿದರು. ಹಾಫಿಝ್ ಅಬ್ರಾರ್ ಮೌಲಾನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News