ಸಿಂಧಗಿ: ಭೀಮಾ ಕೋರೆಗಾಂವ್ ವಿಜಯೋತ್ಸವ ಸ್ತಂಭ ಲೋಕಾರ್ಪಣೆ

Update: 2019-01-02 05:52 GMT

ವಿಜಯಪುರ, ಜ.2: ಭೀಮಾ ಕೋರೆಗಾಂವ್ ವಿಜಯೋತ್ಸವದ 201ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಿಂದಗಿ ತಾಲೂಕಿನಲ್ಲಿ ನಿರ್ಮಿಸಲಾದ ವಿಜಯೋತ್ಸವ ಸ್ತಂಭ ಇಂದು ಲೋಕಾರ್ಪಣೆಗೊಂಡಿತು.

ಸುಮಾರು 51 ಅಡಿ ಎತ್ತರದ ಸ್ತಂಭವನ್ನು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಇಂದು ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಜಾತಿ ವಿಜಾತಿ ಎನ್ನದೆ ಮಾನವ ಕುಲ ಒಂದೇ ಎಂದು ನಾವು ಬದುಕಬೇಕು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನಡೆಸಬೇಕು ಎಂದು ಡಾ/ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲ ವರ್ಗದ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News