ಅಯ್ಯಪ್ಪ ದೇಗುಲ ಪ್ರವೇಶಿಸಿದ ಮಹಿಳೆಯರಿಬ್ಬರು ಮಾವೋವಾದಿಗಳು: ಬಿಜೆಪಿ ಮುಖಂಡ ಮುರಳೀಧರನ್

Update: 2019-01-03 06:34 GMT

ತಿರುವನಂತಪುರ, ಜ.3: ಬುಧವಾರ ಬೆಳಗ್ಗಿನ ಜಾವ ಶಬರಿಮಲೆ ಅಯ್ಯಪ್ಪ ದೇಗುಲವನ್ನು ಪ್ರವೇಶಿಸಿರುವ ಇಬ್ಬರು ಮಹಿಳೆಯರು ಮಾವೋವಾದಿಗಳು. ಇಡೀ ಘಟನೆಯು ‘ಪೂರ್ವ ನಿಯೋಜಿತ’ ಎಂದು ಕೇರಳದ ಬಿಜೆಪಿ ಮುಖಂಡ  ವಿ.ಮುರಳೀಧರನ್ ಹೇಳಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

 ‘‘ಅಯ್ಯಪ್ಪ ದೇಗುಲ ಪ್ರವೇಶಿಸಿರುವ ಮಹಿಳೆಯರು ಭಕ್ತರೇ ಅಲ್ಲ. ಅವರು ಮಾವೋವಾದಿಗಳು. ಆಯ್ದ ಪೊಲೀಸರೊಂದಿಗೆ ಸೇರಿಕೊಂಡು ಸಿಪಿಎಂ ಕಾರ್ಯ ಯೋಜನೆಯನ್ನು ರೂಪಿಸಿದೆ. ಇದು ಕೇರಳ ಸರಕಾರ ಹಾಗೂ ಸಿಪಿಎಂನ ಯೋಜನಾಬದ್ಧ ಪಿತೂರಿಯಾಗಿದೆ’’ ಎಂದು ಮುರಳೀಧರನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News