ಅರಳಗೋಡು: ಮಂಗನಖಾಯಿಲೆಗೆ ಮತ್ತೊಂದು ಜೀವ ಬಲಿ

Update: 2019-01-03 08:53 GMT

ಸಾಗರ, ಜ.3: ಇಲ್ಲಿನ ಅರಳಗೋಡು ವ್ಯಾಪ್ತಿಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ. ಇಲ್ಲಿನ ನಿವಾಸಿ ಲೋಕರಾಜ್ ಜೈನ್(28) ಎಂಬವರು ಮೃತಪಟ್ಟವರಾಗಿದ್ದಾರೆ.

ಕಳೆದ ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಈ ಭಾಗದಲ್ಲಿ ಮಂಗನಖಾಯಿಲೆ  ವ್ಯಾಪಕವಾಗಿದ್ದು, ಪಾರ್ಶ್ವನಾಥ್ ಎಂಬವರು ಇತ್ತೀಚೆ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News