ಕೊಪ್ಪಳ: ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2019-01-05 10:42 GMT

ಕೊಪ್ಪಳ, ಜ.5: ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಕುಟುಂಬವು ಆತ್ಮಹತ್ಯೆಗೆ ಶರಣಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಮೃತಪಟ್ಟವರನ್ನು ಶೇಖರಯ್ಯ ಬೀದನಾಳ್, ಅವರ ಪತ್ನಿ ಜಯಮ್ಮ ಹಾಗು ದಂಪತಿಯ ನಾಲ್ವರು ಪುತ್ರಿಯರಾದ ಬಸಮ್ಮ, ಗೌರಮ್ಮ, ಸಾವಿತ್ರಿ, ಪಾರ್ವತಿ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳು ವಿವಾಹಿತರು ಎನ್ನಲಾಗಿದೆ.

ಫ್ಯಾನ್ ಗೆ ನೇಣು ಹಾಕಿಕೊಳ್ಳುವ ಮೊದಲು ಶೇಖರಯ್ಯ ಪತ್ನಿ ಹಾಗು ಪುತ್ರಿಯರ ಆಹಾರದಲ್ಲಿ ವಿಷ ಬೆರೆಸಿರಬೇಕೆಂದು ಶಂಕಿಸಲಾಗಿದೆ. ಬೆಳೆ ನಷ್ಟದ ನಂತರ ಬ್ಯಾಂಕ್ ಸಾಲಗಳಿಂದ ಕುಟುಂಬವು ಸಂಕಷ್ಟದಲ್ಲಿತ್ತು ಎಂದು ನೆರೆಹೊರೆಯವರು ತಿಳಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News