ವಿಜಯಪುರ: ರಜೆಯಲ್ಲಿ ಆಗಮಿಸಿದ್ದ ಯೋಧ ಹೃದಯಾಘಾತದಿಂದ ನಿಧನ

Update: 2019-01-13 09:54 GMT

ವಿಜಯಪುರ, ಜ. 13: ರಜೆಯ ಮೇಲೆ ತವರಿಗೆ ಆಗಮಿಸಿದ್ದ ಯೋಧನೋರ್ವ ಹೃದಯಾಘಾತದಿಂದ ನಿಧನರಾದ ಘಟನೆ ಸಿಂದಗಿ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. 

ಮೃತರನ್ನು ರುದ್ರಪ್ಪ‌ ಸಿದ್ದಪ್ಪ ಮಾದರ (38) ಎಂದು ಗುರುತಿಸಲಾಗಿದೆ.

ಅವರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎರಡು ತಿಂಗಳ ರಜೆಯ‌ ಮೇಲೆ ಡಿಸೆಂಬರ್ ನಲ್ಲಿ ಆಗಮಿಸಿದ್ದ ಅವರು ನಿನ್ನೆ ಸಂಜೆ ಹೃದಯಾಘಾತಕ್ಕೆ ಒಳಗಾಗಿದ್ದು, ಕೂಡಲೇ ಅವರನ್ನು ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಮೃತರು ತಂದೆ ತಾಯಿ, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News