ನಾಲ್ವರು ಅಂಧರ ಬಾಳಿಗೆ ಬೆಳಕಾದ ನೇತ್ರಗಳು

Update: 2019-01-13 17:58 GMT

ಮಂಡ್ಯ,ಜ.13: ಮಂಡ್ಯ ಯೂತ್ ಗ್ರೂಪ್‍ನ ಅಂಗಸಂಸ್ಥೆಯಾದ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಸಂಸ್ಥೆಯಿಂದ ಒಂದೇ ದಿನ ಮೃತ ಇಬ್ಬರು ಮಹಿಳೆಯರಿಂದ ನಾಲ್ಕು ನೇತ್ರಗಳನ್ನು ಸಂಗ್ರಹಿಸಲಾಯಿತು. 

ಇಲ್ಲಿನ ಗಾಂಧಿನಗರದ ಎಸ್.ಪರಮಶಿವಮ್ಮ (73) ಅವರು ಹೃದಯಾಘಾತದಿಂದ ಹಾಗೂ ಬೀಡಿ ಕಾಲೋನಿಯ ಜೆ.ಜಯಮ್ಮ (62) ಅವರು ಕಿಡ್ನಿ ತೊಂದರೆಯಿಂದ ನಿಧನರಾಗಿದ್ದರು. ಮೃತ ಕುಟುಂಬದವರು ಮಾಡಿದ ಮನವಿಯ ಮೇರೆಗೆ ಮಂಡ್ಯ ಯೂತ್‍ಗ್ರೂಪ್ ಅಧ್ಯಕ್ಷ ಡಾ.ಅನಿಲ್‍ ಆನಂದ್, ಡಾ.ಯಾಶಿಕಾ ಅನಿಲ್ ಸೇರಿದಂತೆ ನೇತ್ರ ಸಂಗ್ರಹ ತಂಡ ಕೂಡಲೇ ಮೃತರ ಮನೆಗಳಿಗೆ ತೆರಳಿ ನೇತ್ರ ಸಂಗ್ರಹಿಸಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ರವಾನಿಸಲಾಯಿತು.

ಕೆಲವೇ ಗಂಟೆಗಳಲ್ಲಿ ನಾಲ್ಕು ನೇತ್ರಗಳು ನಾಲ್ವರು ಅಂಧರ ಬಾಳಿಗೆ ಬೆಳಕಾದವು. ಇದರೊಂದಿಗೆ ಗ್ರೂಪ್ ಸಂಗ್ರಹಿಸಿದ ನೇತ್ರಗಳ ಸಂಖ್ಯೆ 48ಕ್ಕೇರಿದೆ. ಈ ಸಂದರ್ಭದಲ್ಲಿ ಮಂಡ್ಯ ಯೂತ್ ಗ್ರೂಪ್‍ನ ದರ್ಶನ್, ವಿನಯ್, ಪ್ರತಾಪ್ ಸೇರಿದಂತೆ ಕುಟುಂಬದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News