ಕೋಲಾರ ತಾಲೂಕು ಕಚೇರಿ ಬೀಗ ಜಡಿದು ದಸಂಸದಿಂದ ಪ್ರತಿಭಟನೆ

Update: 2019-01-14 08:39 GMT

ಕೋಲಾರ, ಜ.14: ಬಗರ್ ಹುಕುಂ ಸಾಗುವಳಿದಾರರರಿಗೆ ಮಂಜೂರಾತಿ ಕೋರಿ ಫಾರಂ 57ರಡಿ ಅರ್ಜಿ ಸಲ್ಲಿಸಲು  ಇಲ್ಲಿಯವರೆಗೂ ಅರ್ಜಿ ವಿತರಿಸದ ಕೋಲಾರ ತಾಲೂಕು ಆಡಳಿತದ ವಿರುದ್ದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬಗರ್ ಹುಕುಂ ಸಾಗುವಳಿದಾರರರಿಗೆ ಮಂಜೂರಾತಿ ಕೋರಿ ಫಾರಂ 57ರಡಿ ಅರ್ಜಿ ವಿತರಿಸಲಾಗುತ್ತಿದೆ. ಆದರೆ ಕೋಲಾರ ತಹಶೀಲ್ದಾರ್ ಮಾತ್ರ ಅರ್ಜಿ ವಿತರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಂದರ್ಭ ಪ್ರತಿಭಟನಾಕಾರರು ತಹಶೀಲ್ದಾರ್ ವಿರುದ್ಧ ಘೋಷಣೆಗಳನ್ನು ಕೂಗಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News