ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಕುಟುಂಬಕ್ಕೆ ಉ.ಪ್ರ ಪೊಲೀಸ್ ಇಲಾಖೆಯಿಂದ 70 ಲಕ್ಷ ರೂ. ಪರಿಹಾರ

Update: 2019-01-19 06:03 GMT

ಲಕ್ನೋ, ಜ.19: ಇತ್ತೀಚೆಗೆ ಬುಲಂದ್ ಶಹರ್ ಹಿಂಸಾಚಾರದ ವೇಳೆ ಹತ್ಯೆಗೀಡಾದ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಕುಟುಂಬಕ್ಕೆ ಉತ್ತರ ಪ್ರದೇಶದ ಪೊಲೀಸ್ ಇಲಾಖೆಯು 70 ಲಕ್ಷ ರೂ. ಪರಿಹಾರ ನೀಡಿದೆ.

ಇನ್ಸ್ ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆಯು ನೀಡಿರುವ ಪರಿಹಾರವನ್ನು ಮೀರತ್ ವಲಯ ಎಡಿಜಿಪಿ ಪ್ರಶಾಂತ್ ಕುಮಾರ್ ದೃಢಪಡಿಸಿದ್ದಾರೆ.

ಹಿಂಸಾಚಾರವನ್ನು ನಿಯಂತ್ರಣಕ್ಕೆ ತರುವ ಯತ್ನದಲ್ಲಿರುವಾಗ ಸುಬೋಧ್ ಕುಮಾರ್ ಸಿಂಗ್ ಅವರಿಗೆ ದುಷ್ಕರ್ಮಿಗಳು ಕಲ್ಲೆಸದು ಗಾಯಗೊಳಿಸಿದ್ದರು. ಕಲ್ಲೇಟಿನಿಂದ ಗಾಯಗೊಂಡಿದ್ದ ಅವರನ್ನು ಅವರ ಕಾರು  ಚಾಲಕ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ, ವಾಹನವನ್ನು ಹಿಂಬಾಲಿಸಿದ ಗುಂಪೊಂದು ಸುಬೋಧ್ ಕುಮಾರ್ ಮೇಲೆ ಗುಂಡು ಹಾರಿಸಿ ಅವರನ್ನು  ಹತ್ಯೆಗೈದಿತ್ತು. ಈ ಘಟನೆ ಡಿ.3ರಂದು ನಡೆದಿತ್ತು. 

ಸುಬೋಧ್ ಕುಮಾರ್ ಸಿಂಗ್ ಕುಟುಂಬಕ್ಕೆ ಉತ್ತರ ಪ್ರದೇಶ ರಾಜ್ಯ ಸರಕಾರ ಈಗಾಗಲೇ 50 ಲಕ್ಷ ರೂ. ಪರಿಹಾರ ಘೋಷಿಸಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News