‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎನ್ನುತ್ತಲೇ ‘ಸಬ್ಕಾ ವಿನಾಶ್’ ಮಾಡಿದ ಮೋದಿ ಸರಕಾರ: ಯಶವಂತ್ ಸಿನ್ಹಾ

Update: 2019-01-19 08:56 GMT

ಕೊಲ್ಕತ್ತಾ, ಜ.19: ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವಿಲ್ಲಿ ಒಗ್ಗಟ್ಟಾಗಿದ್ದೇವೆ. ನಮಗೆ ಸಮಸ್ಯೆಗಳೇ ನಿಜವಾದ ಸಮಸ್ಯೆಗಳು ಹೊರತು ಮೋದಿ ಸಮಸ್ಯೆಯಲ್ಲ ಎಂದು ಮಾಜಿ ಕೇಂದ್ರ ಸಚಿವ, ಮಾಜಿ ಬಿಜೆಪಿ ನಾಯಕ ಯಶ್ ವಂತ್ ಸಿನ್ಹಾ ಹೇಳಿದರು.

ಪಶ್ಚಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರು ಕೊಲ್ಕತ್ತಾದಲ್ಲಿ ಆಯೋಜಿಸಿರುವ ವಿಪಕ್ಷಗಳ ಮಹಾರ್ಯಾಲಿಯಲ್ಲಿ ಮಾತನಾಡಿದ ಅವರು, “ಈ ಕಾರ್ಯಕ್ರಮದ ನಂತರ ಬಿಜೆಪಿಗರು, ‘ಅವರು ಒಬ್ಬ ವ್ಯಕ್ತಿಯ ವಿರುದ್ಧ ಒಟ್ಟು ಸೇರಿದ್ದಾರೆ, ಅವರು ಪ್ರಧಾನಿ ಮೋದಿಯ ವಿರುದ್ಧ ಒಟ್ಟು ಸೇರಿದ್ದಾರೆ’ ಎಂದು ಹೇಳುತ್ತಾರೆ. ಆದರೆ ನಾವು ಅವರ ಆಲೋಚನೆಗಳ ವಿರುದ್ಧ ಒಂದಾಗಿದ್ದೇವೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ. ಇಂದಿನ ದಿನಗಳಲ್ಲಿ ಅವರು ನಾಶಪಡಿಸದೆ ಇರುವ ಪ್ರಜಾಪ್ರಭುತ್ವದ ಸಂಸ್ಥೆಗಳಿಲ್ಲ ಎನ್ನುವುದು ನಮಗೆ ಗೊತ್ತಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಒಂದಾಗಿದ್ದೇವೆ” ಎಂದವರು ಹೇಳಿದರು.

ಅವರು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದು ಹೇಳಿದರು. ಆದರೆ ‘ಸಬ್ಕಾ ಸಾಥ್’ ತೆಗೆದು ಹಾಕಿ, ‘ಸಬ್ಕಾ ವಿನಾಶ್’ ಮಾಡಿದರು ಎಂದವರು ಇದೇ ಸಂದರ್ಭ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News