ಬೀರೂರು: ಸಾಲಕ್ಕೆ ತೀರಿಸಲಾಗದೆ ಮನನೊಂದು ರೈತ ಮಹಿಳೆ ಆತ್ಮಹತ್ಯೆ

Update: 2019-01-19 13:11 GMT

ಬೀರೂರು, ಜ.19: ವಿವಿಧ ಬ್ಯಾಂಕುಗಳಲ್ಲಿನ ಸಾಲವನ್ನು ತೀರಿಸಲಾಗದೆ ಮನನೊಂದು ರೈತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಯರೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಲಕ್ಷ್ಮಮ್ಮ (45) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದ್ದು, ಇವರು ಕೃಷಿ ಚಟುವಟಿಕೆಗಳಿಗಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 5ಲಕ್ಷ ಹಾಗೂ ಕೈಗಡವಾಗಿ 1ಲಕ್ಷ ರೂ.  ಸಾಲವಾಗಿ ಪಡೆದಿದ್ದರು. ಕಳೆದೆರೆಡು ವರ್ಷಗಳಿಂದ ಮಳೆ ಬೆಳೆಯಿಲ್ಲದೆ ಸಾಲವನ್ನು ತೀರಿಸಲಾಗದೆ ಬಡ್ಡಿ ಬೆಳೆದಿತ್ತು. ಎಲ್ಲಾ ಘಟನೆಗಳಿಂದ ಮನನೊಂದ ಲಕ್ಷ್ಮಮ್ಮ ಶುಕ್ರವಾರ ಸಂಜೆ ತಮ್ಮ ಮನೆಯ ಹಿಂಭಾಗದ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ. ಮೃತರಿಗೆ ಪತಿ, ಓರ್ವ ಪುತ್ರ ಮತ್ತು ಪುತ್ರಿಯರಿದ್ದು, ಬೀರೂ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ಸ್ಥಳ ಮಹಜರು ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News