ವಿಜಯಪುರ: ದೇಹ ತುಂಡರಿಸಿ, ಸುಟ್ಟು ಯುವಕನ ಹತ್ಯೆ

Update: 2019-01-19 18:32 GMT

ವಿಜಯಪುರ, ಜ. 19: ಯುವಕನೋರ್ವನ ದೇಹ ತುಂಡರಿಸಿ, ಸುಟ್ಟು ಹತ್ಯೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಸೋಮದೇವರಹಟ್ಟಿ ಬಳಿ ನಡೆದಿದೆ.

ಮೃತರನ್ನು  ಸುಮಾರು 32 ವರ್ಷದ ವಯಸ್ಸಿನ ಅಪರಿಚಿತ ಯುವಕ ಎಂದು ತಿಳಿದುಬಂದಿದೆ. 

ಕೈ, ಕಾಲು, ಕುತ್ತಿಗೆ, ಎದೆ ಭಾಗವನ್ನ ಕತ್ತರಿಸಿ ಹಾಕಿರುವ ದುಷ್ಕರ್ಮಿಗಳು ನಂತರ ಅಂಗಾಂಗಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಥಳದಲ್ಲಿ ವಾಚ್, ಚೈನ್ ಪತ್ತೆಯಾಗಿದೆ. 

ಸ್ಥಳಕ್ಕೆ ಡಿಎಸ್ಪಿ ಅಶೋಕ, ಗ್ರಾಮೀಣ ಸಿಪಿಐ ಶಂಕರ ಗೌಡ, ಬಸನ ಗೌಡರ್, ತಿಕೋಟ ಪಿಎಸ್ಐ ಅವಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ತಿಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News