ಸೈನಿಕರನ್ನು ರೇಪಿಸ್ಟ್ ಎನ್ನುವ ಮೂಲಕ ವಿಕೃತಿ: ಎಬಿವಿಪಿ ಖಂಡನೆ

Update: 2019-01-20 16:55 GMT

ಬೆಂಗಳೂರು, ಜ.20: ಡಾ.ಶಿವ ವಿಶ್ವನಾಥನ್ ದೇಶ ಕಾಯುವ ಸೈನಿಕರನ್ನು ರೇಪಿಸ್ಟ್‌ಗಳು ಎನ್ನುವುದರ ಮೂಲಕ ವಿಕೃತಿ ಮೆರೆದಿದ್ದಾರೆ. ಎಲ್ಲದಕ್ಕೂ ಮಿಗಿಲಾದದ್ದು, ದೇಶ ಸರ್ವಸ್ವವನ್ನು ದೇಶಕ್ಕೆ, ಸಮಾಜಕ್ಕೆ ಅರ್ಪಿಸುವ ಯೋಧರ ಬಗ್ಗೆ ಈ ರೀತಿ ಹೇಳಿಕೆ ನೀಡಿರುವುದು ತೀವ್ರ ಖಂಡನೀಯ ಎಂದು ಎಬಿವಿಪಿ ತಿಳಿಸಿದೆ.

ರವಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಬಿವಿಪಿ ಸದಸ್ಯರು ಪ್ರತಿಭಟಿಸಿ, ಧಾರವಾಡದ ಸುವರ್ಣ ಮಹೋತ್ಸವ ಭವನದಲ್ಲಿ ಜ.19 ರಂದು ಸಾಹಿತ್ಯ ಸಂಭ್ರಮ ಎನ್ನುವ ಹೆಸರಿನ ಕಾರ್ಯಕ್ರಮದಲ್ಲಿ ‘ನಾಗರಿಕತೆ ಮತ್ತು ರಾಷ್ಟ್ರೀಯತೆ’ ಎಂಬ ಗೋಷ್ಠಿಯಲ್ಲಿ ಸಾಹಿತಿ ಡಾ.ಶಿವ ವಿಶ್ವನಾಥನ್ ದೇಶದ ಸೈನಿಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News