ಇಂದಿನ ಎಲ್ಲಾ ಕೆಟ್ಟ ರಾಜಕೀಯ ಬೆಳವಣಿಗೆಗೆ ಬಿಜೆಪಿ ಕಾರಣ: ಹೆಚ್.ಡಿ.ದೇವೇಗೌಡ

Update: 2019-01-20 17:20 GMT

ತುಮಕೂರು,ಜ.20: ರಾಜ್ಯದಲ್ಲಿ ಮೊದಲಿಗೆ 2008ರಲ್ಲಿ ರೆಸಾರ್ಟ್ ರಾಜಕಾರಣ ಆರಂಭಿಸಿದ್ದು ಬಿಜೆಪಿ. ಅವರೇ ಇಂದಿನ ಎಲ್ಲಾ ಕೆಟ್ಟ ರಾಜಕೀಯ ಬೆಳವಣಿಗೆಗಳಿಗೆ ಕಾರಣ ಎಂದು ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತುಮಕೂರು ಜಿಲ್ಲೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಕೆಲವರು, ಬಿಜೆಪಿಯಿಂದ ಕೆಲವರನ್ನು ಕರೆದುಕೊಂಡು ಹೋಗಿ, ಅವರಿಂದ ರಾಜೀನಾಮೆ ಕೊಡಿಸಿ, ಮರುಚುನಾವಣೆ ನಡೆಸಿ, ನಂತರ ಮಂತ್ರಿ ಮಾಡಿದರು. ಈಗಲೂ ಅವರು ಐಶಾರಾಮಿ ರೆಸಾರ್ಟ್‍ನಲ್ಲಿ ಕುಳಿತು, ಇನ್ನೊಂದು ಪಕ್ಷದವರನ್ನು ಸೆಳೆಯಲು ಪ್ರಯತ್ನಿಸಿದರು. ಇದರ ಫಲವಾಗಿ ಇನ್ನೊಂದು ಪಕ್ಷದವರು ರೆಸಾರ್ಟ್ ಗೆ ಹೋಗುವಂತಾಯಿತು. ಆದರೆ ಮಾಧ್ಯಮಗಳು ಕೇವಲ ಒಂದು ಪಕ್ಷದ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಭೈರತಿ ಸುರೇಶ್ ಐಶಾರಾಮಿ ಕಾರು ಉಡುಗೋರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ದೇವೇಗೌಡರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಕ್ಕೆ ಶೀಘ್ರವೇ ತೆರೆ ಬಿಳಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News