34 ಕಿಂಟ್ವಾಲ್ ಅಡಿಕೆ ಕಳವು: ಆರು ಆರೋಪಿಗಳ ಬಂಧನ

Update: 2019-01-21 08:22 GMT

ದಾವಣಗೆರೆ, ಜ.21: ಅಡಿಕೆ ಕಳವು ಜಾಲವೊಂದನ್ನು ಭೇದಿಸಿರುವ ದಾವಣಗೆರೆ ಗ್ರಾಮಾಂತರ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಸವಪಟ್ಟಣದ ಚಂದ್ರ ನಾಯ್ಕ(21), ಭೀಮಸಮುದ್ರದ ಭರತ್ ನಾಯ್ಕ್(26), ಚನ್ನಗಿರಿ ತಾಲೂಕಿನ ಸಮೀವುಲ್ಲಾ(25), ಜಾವೇದ್(24), ಅಂಜುಂ(45) ಹಾಗೂ ಹಿದಾಯತ್(25) ಬಂಧಿತ ಆರೋಪಿಗಳು. ಇವರಿಂದ ಸುಮಾರು 11.31 ಲಕ್ಷ ರೂ. ವೌಲ್ಯದ 34.30 ಕ್ವಿಂಟಾಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಮಿನಿ ಲಾರಿಯೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಸಂತೆಬೆನ್ನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳಲ್ಲಿ ಬಂಧಿತ ಆರು ಮಂದಿ ಆರೋಪಿಗಳಾಗಿದ್ದಾರೆ. ಇವರು ಕದ್ದ ಅಡಿಕೆಗಳನ್ನು ಶಿವಮೊಗ್ಗದ ಸಾಗರ ಮತ್ತು ಚಿತ್ರದುರ್ಗದ ಭೀಮಸಮುದ್ರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News