ಸಿದ್ದಗಂಗಾ ಶ್ರೀ ನಿಧನಕ್ಕೆ ಕಂಬನಿ ಮಿಡಿದ ರಾಹುಲ್ ಗಾಂಧಿ
Update: 2019-01-21 13:18 GMT
ಹೊಸದಿಲ್ಲಿ, ಜ. 21: ತುಮಕೂರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಂಬನಿ ಮಿಡಿದಿದ್ದಾರೆ.
ಶಿವಕುಮಾರ ಸ್ವಾಮೀಜಿಯವರ ನಿಧನ ವಾರ್ತೆ ಕೇಳಿ ವಿಷಾದವಾಗಿದೆ. ಎಲ್ಲ ಸಮುದಾಯ, ವಿವಿಧ ಧರ್ಮಗಳ ಲಕ್ಷಾಂತರ ಭಾರತೀಯರಿಂದ ಪೂಜಿಸಿ, ಗೌರವಿಸಲ್ಪಟ್ಟವರು ಶ್ರೀಗಳು. ಶ್ರೀಗಳ ಭಕ್ತವೃಂದಕ್ಕೆ ನನ್ನ ಸಂತಾಪಗಳು ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.