ಹನೂರು: ಜೆಡಿಎಸ್ ಕಚೇರಿಯಲ್ಲಿ ಶಿವಕುಮಾರ ಸ್ವಾಮೀಜಿಗೆ ಶ್ರದ್ದಾಂಜಲಿ

Update: 2019-01-23 18:31 GMT

ಹನೂರು,ಜ.23: ತ್ರಿವಿಧ ದಾಸೋಹಿ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ನಿಧನರಾದ ಹಿನ್ನೆಲೆಯಲ್ಲಿ ಹನೂರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.

ನಂತರ ಜೆಡಿಎಸ್ ಮುಖಂಡರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

ಬಳಿಕ ಜೆಡಿಎಸ್ ಮುಖಂಡ ಆರ್.ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್‍ ಮುಖಂಡರಾದ ನಾಗೇಂದ್ರ ಬಾಬು, ಶಿವಮೂರ್ತಿ, ಮಂಜೇಶ್, ಬಾಬು, ರಾಜಶೇಖರ್ ಮೂರ್ತಿ, ನಿಂಗೇಗೌಡ್ರು, ಬಸವರಾಜು, ಹೊಸರು ಬಸವರಾಜು, ಅಮೀನ್, ಯುವ ಘಟಕದ ಅಧ್ಯಕ್ಷ ಪ್ರಸನ್ನ, ಮಹೇಶ್‍ ಬಂಕ್, ಲೋಕೆಶ್, ಕಿರಣ್, ಗೋವಿಂದ್, ನವೀನ್ ಸೇರಿದಂತೆ ಹಲವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News