ಹಂಪಿ ಕನ್ನಡ ವಿವಿ: ಕವಿ ಕಾವ್ಯ ಸಂಭ್ರಮ, ಬೆಳ್ಳಿಹಬ್ಬ ರದ್ದು

Update: 2019-01-28 10:54 GMT

ಹೊಸಪೇಟೆ, ಜ. 28: ಜನವರಿ 31ರಂದು ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂಭ್ರಮ, ಫೆಬ್ರವರಿ 1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದುಪಡಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ತಿಳಿಸಿದ್ದಾರೆ.

ಜ. 30ಕ್ಕೆ ಘಟಿಕೋತ್ಸವ ನಡೆಯಲಿದ್ದು, ಇಬ್ಬರಿಗೆ ಡಿ.ಲಿಟ್., 87 ಜನಕ್ಕೆ ಪಿಎಚ್.ಡಿ., 26 ಮಂದಿಗೆ ಎಂ.ಫಿಲ್ ಸೇರಿದಂತೆ ವಿವಿಧ ಕೋರ್ಸ್ ಮುಗಿಸಿರುವ ಒಟ್ಟು 645 ಜನರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.

ವಿಜ್ಞಾನಿ ಎ.ಎಸ್.ಕಿರಣ ಕುಮಾರ ನುಡಿಹಬ್ಬ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಲಿದ್ದು, ರಾಜ್ಯಪಾಲ ಅಧ್ಯಕ್ಷತೆ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News