ಪ್ರಾಣ ಭಿಕ್ಷೆ ಬೇಡಿದ ನವಜೋಡಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Update: 2019-01-29 17:05 GMT

ಹುಬ್ಬಳ್ಳಿ, ಜ.29: ಹುಡುಗಿ ಮನೆಯವರ ವಿರೋಧದ ನಡುವೆ ಮನೆಯಿಂದ ಓಡಿ ಬಂದು ನಿನ್ನೆಯಷ್ಟೇ ಮದುವೆಯಾಗಿದ್ದ ಯುವ ಪ್ರೇಮಿಗಳು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. 'ನಮಗೆ ಹುಡುಗಿ ಮನೆಯವರಿಂದ ಬೆದರಿಕೆ ಬರುತ್ತಿದ್ದು, ಆತ್ಮಹತ್ಯೆಗೆ ಮುಂದಾಗಿದ್ದೆವು, ಆದರೆ ಸಾಯಲು ಮನಸ್ಸಿಲ್ಲ. ನಮಗೆ ರಕ್ಷಣೆ ನೀಡಿ' ಎಂದು ನವಜೋಡಿಗಳು ಸೆಲ್ಫಿ ವಿಡಿಯೋ ಮೂಲಕ ಮನವಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ರಶ್ಮಿ ಹೂಗಾರ ಮತ್ತು ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮಂಜುನಾಥ ಗುರವ್ ಕಳೆದೊಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಹುಡುಗಿ ಮನೆಯವರು ಪ್ರೀತಿಗೆ ಅಡ್ಡಿಯಾಗಿದ್ದರಿಂದ ಸೋಮವಾರ ಹುಬ್ಬಳ್ಳಿಯ ಬೂದನಗುಡ್ಡದ ದೇವಾಲಯದಲ್ಲಿ ಮದುವೆಯಾಗಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಹುಡುಗಿ ಕಡೆಯವರು ನವಜೋಡಿಯನ್ನು ಅಪಹರಣ ಮಾಡಿದ್ದಾರೆ ಎನ್ನಲಾಗಿದೆ.

ಪ್ರೇಮಿಗಳ ಜೊತೆಗೆ ಹುಡುಗನ ತಾಯಿ ಮಹಾದೇವಿ ಹಾಗೂ ಸಹೋದರ ಸಂಜೀವ್ ಎಂಬಿಬ್ಬರನ್ನು ಸಹ ಅಪಹರಣ ಮಾಡಲಾಗಿದೆ ಎಂದು ಹುಡುಗನ ಕಡೆಯವರು ಆರೋಪಿಸಿದ್ದು, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಯುವಜೋಡಿಗಳ ಸೆಲ್ಫಿ ವಿಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News