ಮೂಡಿಗೆರೆ: ವ್ಯಕ್ತಿಯೋರ್ವನ ಗುಂಡಿಕ್ಕಿ ಹತ್ಯೆ

Update: 2019-02-01 07:10 GMT

ಚಿಕ್ಕಮಗಳೂರು, ಫೆ.1: ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತರನ್ನು ಗೋಪಾಲ್ (38) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಂಜುನಾಥ್ ಎಂಬಾತನನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.
 
ಹಳೆ ವೈಷಮ್ಯದಲ್ಲಿ ಗೋಪಾಲ್‌ರಿಗೆ ಗುರುವಾರ ರಾತ್ರಿ ಭಾರತೀಬೈಲ್ನ ಕಾಪಿ ತೋಟದಲ್ಲಿ ಮಂಜುನಾಥ್ ಗುಂಡಿಕ್ಕಿದ್ದನೆನ್ನಲಾಗಿದೆ. ಈ ಬಗ್ಗೆ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News