ಜಮೀನು ತಕರಾರು: ದಾಯಾದಿಗಳ ಹೊಡೆದಾಟಕ್ಕೆ ಓರ್ವ ಬಲಿ
Update: 2019-02-04 04:18 GMT
ವಿಜಯಪುರ, ಫೆ.4: ಜಮೀನಿನ ತಕರಾರಿಗೆ ಸಂಬಂಧಿಸಿ ದಾಯಾದಿಗಳ ನಡುವೆ ಉಂಟಾದ ಹೊಡೆದಾಟ ಓರ್ವನ ಕೊಲೆಯೊಂದಿಗೆ ಅಂತ್ಯಗೊಂಡ ಘಟನೆ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾ ನದಿ ತೀರದ ಯಲ್ಲಮ್ಮನ ಬೂದಿಹಾಳ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಮೃತರನ್ನು ಬೂದಿಹಾಳ ನಿವಾಸಿ ಸಿದ್ದಪ್ಪ ಹೊಸಮನಿ(55) ಎಂದು ಗುರುತಿಸಲಾಗಿದೆ.
ಜಮೀನಿನ ವಿವಾದಕ್ಕೆ ಸಂಬಂಧಿಸಿ ದಾಯಾದಿಗಳ ನಡುವೆ ವಾಗ್ವಾದ ನಡೆದಿದೆ. ಇದು ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಸಿದ್ದಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.