ಯಾರು ಅಧಿಕಾರದಲ್ಲಿರುತ್ತಾರೋ ಅವರೇ ನಮ್ಮ ಸಿಎಂ: ಶಾಮನೂರು ಶಿವಶಂಕರಪ್ಪ

Update: 2019-02-04 18:49 GMT

ದಾವಣಗೆರೆ,ಪೆ.5: ಯಾರು ಅಧಿಕಾರದಲ್ಲಿರುತ್ತಾರೋ ಅವರೇ ನಮ್ಮ ಸಿಎಂ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು. 

ತಾಲೂಕಿನ ಬೆಳವನೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಯಾದವರು ಮಾಜಿಯೇ. ನಮಗಂತಲೇ ಯಾರೂ ಸಿಎಂ ಇಲ್ಲ. ಅಧಿಕಾರದಲ್ಲಿ ಯಾರಿರುತ್ತಾರೋ ಅವರೇ ಮುಖ್ಯಮಂತ್ರಿ. ನಮ್ಮ ಪಕ್ಷದವರಿಗೆ ಒಬ್ಬ ಮುಖ್ಯಮಂತ್ರಿ, ಮತ್ತೊಂದು ಪಕ್ಷಕ್ಕೆ ಇನ್ನೊಬ್ಬ ಮುಖ್ಯಮಂತ್ರಿ ಅಂತ ಇರುವುದಿಲ್ಲ ಎಂದರು. 

ಬಿಜೆಪಿಯವರ ಬಳಿ ಸಾಕಷ್ಟು ದುಡ್ಡಿದೆ. ಇದೇ ಕಾರಣಕ್ಕೆ ಆಪರೇಷನ್ ಕಮಲಕ್ಕೆ ಮುಂದಾಗುತ್ತಿದ್ದಾರೆ. ಕಳೆದ 6 ತಿಂಗಳಿನಿಂದಲೂ ಬಿಜೆಪಿಯವರು ಆಪರೇಷನ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿಯವರ ಆಪರೇಷನ್ ಯಶಸ್ವಿಯಾಗಲ್ಲ ಎಂದ ಅವರು, ಲೋಕಸಭಾ ಕ್ಷೇತ್ರಕ್ಕೆ ರೇವಣ್ಣ ಅಷ್ಟೇ ಅಲ್ಲ, ಯಾವ ಅಣ್ಣನ್ನೇ ನಿಲ್ಲಿಸಿದರೂ ಗೆಲ್ಲಿಸುತ್ತೇವೆ. ನಾನೇ ದಾವಣಗೆರೆ ಅಭ್ಯರ್ಥಿಯಾಗಿ ನಿಂತರೂ ಅಚ್ಚರಿ ಇಲ್ಲ ಎಂದರು. ಜಿಪಂ ಸದಸ್ಯ ಹದಡಿ ಜಿ.ಸಿ. ನಿಂಗಪ್ಪ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News