ಸೋಮವಾರಪೇಟೆ: ಯುವಕ ನೇಣು ಬಿಗಿದು ಆತ್ಮಹತ್ಯೆ

Update: 2019-02-14 12:05 GMT

ಸೋಮವಾರಪೇಟೆ,ಫೆ.14: ಬಾರ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

ಮಾದಾಪುರ ಮೂವತ್ತೊಕ್ಲು ಗ್ರಾಮದ ತಂಬುಕುತ್ತಿರ ಮಂದಣ್ಣ ಎಂಬವರ ಪುತ್ರ ಬೋಪಣ್ಣ(28) ಮೃತ ಯುವಕ. ಮಡಿಕೇರಿ ರಸ್ತೆಯಲ್ಲಿರುವ ಸಫಾಲಿ ಬಾರ್ ನಲ್ಲಿ ಕಳೆದ 10 ವರ್ಷಗಳಿಂದ ಬೋಪಣ್ಣ ಸಪ್ಲೈಯರ್ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಎಂದಿನಂತೆ ಮಂಗಳವಾರ ಕೆಲಸ ನಿರ್ವಹಿಸಿದ್ದಾನೆ. ಆದರೆ ಬುಧವಾರ ಬೆಳಗ್ಗೆ ನೋಡಿದಾಗ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಹಜರು ನಡೆಸಿದ್ದಾರೆ. ಮೃತ ಯುವಕ ಮಾನಸಿಕ ರೋಗದಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತನಿಖಾಧಿಕಾರಿ ಎಸ್ಸೈ ಶಿವಶಂಕರ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News