ಉಗ್ರರ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮ

Update: 2019-02-15 04:51 GMT

ಬೆಂಗಳೂರು, ಫೆ.15: ಪುಲ್ವಾಮದಲ್ಲಿ ಗುರುವಾರ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಸಂಖ್ಯೆ 44ಕ್ಕೆ ಏರಿದ್ದು, ಹುತಾತ್ಮರಾದವರಲ್ಲಿ ಮಂಡ್ಯದ ಯೋಧ ಗುರು ಸೇರಿದ್ದಾರೆ.

ಗುರು ಮಂಡ್ಯದ ಗುಡಿಗೆರೆಯ ನಿವಾಸಿ. ಹೊನ್ನಯ್ಯ -ಚಿಕ್ಕ ತಾಯಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಪ್ರಥಮ ಪುತ್ರ. 8 ವರ್ಷಗಳ ಹಿಂದೆ ಮಿಲಿಟರಿ ಸೇರಿದ್ದ  ಅವರು ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಬಂದಿದ್ದರು.   15 ದಿನಗಳ  ಊರಿನಲ್ಲಿದ್ದು ಬಳಿಕ  ಫೆ.10ರಂದು ಕರ್ತವ್ಯಕ್ಕೆ ವಾಪಸಾಗಿದ್ದರು. ಅವರು ಕಳುಹಿಸಿದ್ದ ಕೊನೆಯ ವಿಡಿಯೋದಲ್ಲಿ  " ದೇಶ ಸೇವೆ ಹೆಮ್ಮೆ '' ಎಂದು ಹೇಳಿದ್ದರು.  ಗುರು ಹುತಾತ್ಮರಾದ ಹಿನ್ನೆಲೆಯಲ್ಲಿ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News