ಕೇಂದ್ರ ಸರಕಾರ , ಸೇನೆಯ ಜೊತೆ ನಾವಿದ್ದೇವೆ : ರಾಹುಲ್ ಗಾಂಧಿ

Update: 2019-02-15 06:56 GMT

ಹೊಸದಿಲ್ಲಿ, ಫೆ.15: ಭಾರತದ ಆತ್ಮದ ಮೇಲೆ ಉಗ್ರರ ದಾಳಿ ನಡೆದಿದೆ. ನಾವು ನಮ್ಮ ಯೋಧರನ್ನು ಕಳೆದುಕೊಂಡಿದ್ದೇವೆ. ಉಗ್ರರರನ್ನು ದಮನಿಸಲು  ಕೇಂದ್ರ ಸರಕಾರ ಕೈಗೊಳ್ಳುವ ಎಲ್ಲ  ನಿರ್ಧಾರಗಳಿಗೂ ನಮ್ಮ ಬೆಂಬಲವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶವನ್ನು ವಿಭಜಿಸುವುದು  ಭಯೋತ್ಪಾದಕರ ಉದ್ದೇಶವಾಗಿದೆ. ಇಂಥಹ  ಘಟನೆಗಳನ್ನು ನಾವು ಮರೆಯಲು ಸಾಧ್ಯವಿಲ್ಲ.  ಯಾವುದೇ  ಶಕ್ತಿ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಕೇಂದ್ರ. ಸರಕಾರದ ಎಲ್ಲ  ನಿರ್ಧಾರಗಳಿಗೂ ನಮ್ಮ ಬೆಂಬಲವಿದೆ.  ಎಲ್ಲ ವಿಪಕ್ಷಗಳು ಕೇಂದ್ರ  ಸರಕಾರ ಮತ್ತು ಸೇನೆಯ ಜತೆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News