ಮೂಡಿಗೆರೆ: ಹುತಾತ್ಮ ಯೋಧರಿಗೆ ನಮನ

Update: 2019-02-16 04:11 GMT

ಚಿಕ್ಕಮಗಳೂರು, ಫೆ.16: ಜಮ್ಮು ಕಾಶ್ಮೀರದಲ್ಲಿ ಸೈನಿಕರ ಮೇಲೆ  ನಡೆದ ಭೀಕರ ಭಯೋತ್ಪಾದನಾ ಕೃತ್ಯದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮೂಡಿಗೆರೆಯ ಲಯನ್ಸ್  ವೃತ್ತದಲ್ಲಿ ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟಿನಿಂದ  ನಮನ ಸಲ್ಲಿಸಲಾಯಿತು.

ಮೊದಲಿಗೆ ಎರಡು ನಿಮಿಷದ ಮೌನಚಾರಣೆ ಮಾಡಲಾಯಿತು.

ಹುತಾತ್ಮ ಯೋಧರಿಗೆ ನಮನ ಸಭೆಯಲ್ಲಿ ದಲಿತ ಮುಖಂಡರಾದ ಲೋಕವಳ್ಳಿ ರಮೇಶ್, ಪಿ.ಕೆ.ಮಂಜುನಾಥ,  ವಕೀಲರಾದ ರಘು, ರಾಮು,  ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕ ಅಲ್ತಾಫ್ ಬಿಳಗುಳ , ಮುಸ್ಲಿಂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಿರುಗುಂದ ಅಬ್ಬಾಸ್, ಪೀಸ್ ಆ್ಯಂಡ್ ಅವೆರ್ನೆಸ್ ಟ್ರಸ್ಟಿನ ಪಧಾದಿಕಾರಿಗಳಾದ ದಾವೂದ್ ಹಕೀಮ್, ಆಸಿಫ್, ಆಶಿಕ್,  ಮುಬಾರಕ್,  ರಫೀಕ್,  ಜಂಶೀದ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಪ್ರವೀಣ್ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News