ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಸಿಎಂ ಮಂಡ್ಯಕ್ಕೆ

Update: 2019-02-16 07:21 GMT

ಮಂಡ್ಯ, ಫೆ.16: ಹುತಾತ್ಮ ಯೋಧ ಎಚ್.ಗುರುವಿನ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡಿಗೆರೆ ಕಾಲನಿಗೆ ಆಗಮಿಸಲಿದ್ದಾರೆ.

 ಮುಖ್ಯಮಂತ್ರಿಯ ಗುಡಿಗೆರೆ ಗ್ರಾಮಕ್ಕೆ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದು, ಸರ್ಕಾರದ ವತಿಯಿಂದ ಆರ್ಥಿಕ ಪರಿಹಾರ ಮತ್ತು ಗುರು ಅವರ ಪತ್ನಿಗೆ ಸರ್ಕಾರಿ ಕೆಲಸದ ಘೋಷಣೆ ಮಾಡಲಿದ್ದಾರೆ ಎಂದು ಸಚಿವ ಪುಟ್ಟರಾಜು ತಿಳಿಸಿದ್ದಾರೆ.

ಗುಡಿಗೆರೆ ಕಾಲನಿಗೆ ಭೇಟಿ ನೀಡಿದ ಸಚಿವ ಪುಟ್ಟರಾಜು, ಗುರು ತಂದೆ ಜೊತೆ ಮಾತನಾಡಿ ಸರ್ಕಾರದ ಪರವಾಗಿ ಅವರಿಗೆ ಸಾಂತ್ವಾನ ಹೇಳಿದರು.

ಅಪರಾಹ್ನ 2 ಗಂಟೆ ಸುಮಾರಿಗೆ ಗುರು ಪಾರ್ಥಿವ ಶರೀರ ರಸ್ತೆ ಮೂಲಕ ಗ್ರಾಮಕ್ಕೆ ಆಗಮಿಸಲಿದ್ದು, ಜೊತೆಗೆ ಮುಖ್ಯಮಂತ್ರಿ ಕೂಡಾ ಬರಲಿದ್ದಾರೆ. ಗ್ರಾಮಸ್ಥರು ಅಪೇಕ್ಷೆ ವ್ಯಕ್ತಪಡಿಸಿದಂತೆ ಸರ್ಕಾರಿ ಜಾಗದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಗುರು ಅವರ ಅಂತ್ಯಸಂಸ್ಕಾರ ಸಂಜೆ 6 ಗಂಟೆಗೆ ನೆರವೇರಲಿದೆ ಎಂದು ಪುಟ್ಟರಾಜು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News