ಅಪರಿಚತ ವಾಹನ ಢಿಕ್ಕಿ: ಪಾದಚಾರಿ ಸಾವು

Update: 2019-02-16 13:15 GMT

ಬೀರೂರು, ಫೆ.16: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬ್ಯಾಗಡೆಹಳ್ಳಿ ಸಮೀಪ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

ಶನಿವಾರ ಮುಂಜಾನೆ ಪಟ್ಟಣ ಸಪೀಪದ ಬ್ಯಾಗಡೆಹಳ್ಳಿ ಸಮೀಪ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಅಪರಿಚತ ವಾಹನ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದ್ದು, ಮೃತನ ವಿವರ ಪತ್ತೆಯಾಗಿಲ್ಲ.

ಮೃತ ವ್ಯಕ್ತಿಯು ತೆಳುನೀಲಿ ಬಣ್ಣದ ಅಂಗಿ, ಕಂದು ಬಣ್ಣದ ಪ್ಯಾಂಟು ಧರಿಸಿದ್ದು, ಈ ಸಂಬಂಧ ಬೀರೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಸಂಬಂಧಪಟ್ಟವರು ಮಾಹಿತಿಗಾಗಿ ಬೀರೂರು ವೃತ್ತ ನಿರೀಕ್ಷಕರನ್ನು (ದೂರವಾಣಿ 08267 255890) ಸಂಪರ್ಕಿಸಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News