ಆಭರಣ ಮಳಿಗೆ ಎದುರು ಮೊಟ್ಟೆ ತಿಂದ ಬಾಲಕನಿಗೆ ಗುಂಡೇಟಿನ ಶಿಕ್ಷೆ !
Update: 2019-02-17 04:23 GMT
ಹೊಸದಿಲ್ಲಿ, ಫೆ.17: ಆಭರಣ ಅಂಗಡಿಯೊಂದರ ಎದುರು ತನ್ನ ಸ್ನೇಹಿತರ ಜತೆಗೆ ಮೊಟ್ಟೆ ತಿಂದ ಎಂಬ ಕಾರಣಕ್ಕೆ 17 ವರ್ಷದ ಬಾಲಕನೊಬ್ಬನಿಗೆ ಗುಂಡಿಕ್ಕಿದ ಅಮಾನವೀಯ ಘಟನೆ ಈಶಾನ್ಯ ದಿಲ್ಲಿಯ ಜ್ಯೋತಿನಗರ ಪ್ರದೇಶದಲ್ಲಿ ಸಂಭವಿಸಿದೆ.
ಮನೀಶ್ (17) ಎಂಬಾತ ತನ್ನ ಸ್ನೇಹಿತರ ಜತೆ ಸೇರಿ ಉಮೇಶ್ ವರ್ಮಾ ಎಂಬವರ ಆಭರಣ ಮಳಿಗೆಯ ಎದುರು ನಿಂತು ಮೊಟ್ಟೆ ತಿನ್ನುತ್ತಿದ್ದ. ಇದನ್ನು ಮಳಿಗೆ ಉಮೇಶ್ ವರ್ಮಾ ಆಕ್ಷೇಪಿಸಿದ. ಆದರೂ ಯುವಕರು ಅಲ್ಲೇ ಇದ್ದುದನ್ನು ನೋಡಿದ ಮಳಿಗೆ ಉಮೇಶ್ ವರ್ಮಾ, ಯಾರನ್ನೋ ಕರೆಸಿ ಮನೀಶ್ಗೆ ಗುಂಡು ಹೊಡೆಸಿದ್ದಾನೆ ಎಂದು ಈಶಾನ್ಯ ದಿಲ್ಲಿ ಡಿಸಿಪಿ ಅತುಲ್ ಕುಮಾರ್ ಠಾಕೂರ್ ಹೇಳಿದ್ದಾರೆ.
ಮನೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುಂಡು ಆತನ ಎದೆಯ ಮೂಲಕ ಹೊಕ್ಕು ಹೊರಬಂದಿದೆ. ಮನೀಶ್ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ವರ್ಮಾನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.