ಹಿರಿಯ ಗೆಳೆಯ

Update: 2019-02-17 11:46 GMT

ಹೃದಯದ ಭಾಷೆ
ಆಳ ಅರಿವು
ಮಗುವಿನ ಮನಸ್ಸುಳ್ಳ
ದೇವರ ಮಕ್ಕಳ ಹಿತ ಚಿಂತಕ

ಪ್ರಚಾರವಿಲ್ಲದ ದಾನ
ಬಡವರ ಸ್ವಾಭಿಮಾನದ ಕಾಳಜಿ
ಭವಿಷ್ಯದ ದೂರದೃಷ್ಟಿ
ವಿರಳಾತಿ ವಿರಳ ಭಾವಜೀವಿ

ಬ್ಯಾರಿ ಆಂದೋಲನದ ರೂವಾರಿ
ಪಟ್ಟ ಪೀಠಗಳ ಮೋಹವಿಲ್ಲದ
ದಿಟ್ಟ ದಾರಿ, ಸ್ಪಷ್ಟ ಗುರಿಯುಳ್ಳ
ಅನನ್ಯ ಮಾರ್ಗದರ್ಶಕ

ವಿದ್ಯಾರ್ಥಿಗಳ ಬಾಳಲ್ಲಿ
ಜ್ಯೋತಿ ಬೆಳಗಿಸಿ
ಅಂಧಕಾರವನ್ನು ನೀಗಿಸಿ
ಹೊರಟ ಸಮಾಜ ಸೇವಕ

ದೇವನ ಕರೆಯಲ್ಲಿ ಬ್ಯುಸಿ ಇದ್ದರೂ
ಎಲ್ಲರಿಗೆಟುಕುತ್ತಿದ್ದ ಸರಳಜೀವಿ
ಮತ್ತೆ ಭೇಟಿ ಸ್ವರ್ಗದಲ್ಲಾಗುವ ಎಂದ
ರಹೀಂ ಟೀಕೆಯವರಿಗೆ
ಓಕೆ ಎನ್ನುವುದೇ ನಮ್ಮ ಸವಾಲಾಗಿತ್ತು

- ಅಕ್ಬರ್ ಅಲಿ, ಕಾವಳಕಟ್ಟೆ

Writer - ಅಕ್ಬರ್ ಅಲಿ, ಕಾವಳಕಟ್ಟೆ

contributor

Editor - ಅಕ್ಬರ್ ಅಲಿ, ಕಾವಳಕಟ್ಟೆ

contributor

Similar News

ಸಲ್ಮಾತು