ಗ್ರಾಪಂ ಸದಸ್ಯನ ಕೊಲೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ

Update: 2019-02-20 18:39 GMT

ಪಾಂಡವಪುರ, ಫೆ.20: ಹಳೇ ವೈಷಮ್ಯದಿಂದ ಹತ್ಯೇಗೀಡಾದ ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಚಿಕ್ಕಾಡೆ ಗ್ರಾಮದ ನಿವಾಸಿಗಳಾದ ಯೋಗೇಗೌಡ ಹಾಗೂ ಆತನ ಪತ್ನಿ ಜಯಲಕ್ಷ್ಮೀ ಎಂಬವರು ಬಂಧಿತ ಆರೋಪಿಗಳು.
ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆಯುತ್ತಿದ್ದ ದೇವಿರಮ್ಮ ಹಬ್ಬದ ಜಾತ್ರಾ ಸಮಯದಲ್ಲಿ ಗ್ರಾಪಂ ಸದಸ್ಯ ತಿಮ್ಮೇಗೌಡರನ್ನು ಐವರ ಗುಂಪು ಚಾಕುವಿನಿಂದ ಇರಿದು ಹತ್ಯೆ ಮಾಡಿತ್ತು. 

ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳಾದ ಕುಮಾರ್, ಮದನ್ ಹಾಗೂ ಚಂದು ಅವರ ಪತ್ತೆಗಾಗಿ ಪಾಂಡವಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News