ಎಮ್ಮೆಮಾಡು ಉರೂಸ್‍ಗೆ ಚಾಲನೆ

Update: 2019-02-22 12:14 GMT

ನಾಪೋಕ್ಲು,ಫೆ.22: ಐತಿಹಾಸಿಕ ಎಮ್ಮೆಮಾಡು ಉರೂಸ್‍ಗೆ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿಯವರು ದ್ವಜಾರೋಹಣ ಮಾಡುವುದರೊಂದಿಗೆ ಇಂದು ಚಾಲನೆ ನೀಡಲಾಯಿತು. 

ಇದಕ್ಕೂ ಮೊದಲು ದರ್ಗಾ ಶರೀಫ್‍ನಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ಧರ್ಮ ಗುರುಗಳಾದ ಮುಸ್ತಾಫ ಸಯ್ಯದ್ ಹಾಮಿದ್ ಕೋಯಮ್ಮ ತಂಙಳ್, ಸಯ್ಯಿದ್ ಮುನವ್ವಿರಲಿ ಶಿಹಾದ್ ತಂಙಳ್ ಪಾಣಕ್ಕಾಡ್, ಕೆ.ಎಂ. ಹುಸೈನ್ ಸಖಾಫಿ, ಸಯ್ಯಿದ್ ಕೋಯಮ್ಮ ತಂಙಳ್ ಎಮ್ಮೆಮಾಡು, ಪೂಕೋಯ ತಂಙಳ್ ಬಾಣವರ, ಸಿ.ಎ.ಹಸೈನಾರ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಖಾದರ್ ಹಾಜಿ, ಶಾದುಲಿ ಹಾಜಿ ಸೇರಿ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News