ಜೆಡಿಎಸ್ ಸದಸ್ಯರ ಅಭಿಪ್ರಾಯದಂತೆ ಬಿಜೆಪಿ ಜೊತೆ ಹೊಂದಾಣಿಕೆ: ಸಚಿವ ಜಿ.ಟಿ ದೇವೇಗೌಡ
Update: 2019-02-22 18:41 GMT
ಮೈಸೂರು,ಫೆ.22: ನಾಳೆ ನಡೆಯುವ ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸಲು ನಿರ್ಧರಿಸಿದ್ದು, ಜೆಡಿಎಸ್ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಬಿಜೆಪಿ ಜೊತೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದು ಇಂದು ಮಾಡಿಕೊಂಡ ತೀರ್ಮಾನವಲ್ಲ. ಈ ಹಿಂದೆಯೇ ಮಾಡಿಕೊಂಡ ತೀರ್ಮಾನವಾಗಿದೆ. ಹಾಗಾಗಿ ಬಿಜೆಪಿ ಜೊತೆ ಹೋಗುತ್ತಿದ್ದೇವೆ. ಜೆಡಿಎಸ್ ಸಭೆ ವೇಳೆ ನಮ್ಮೆಲ್ಲ ಸದಸ್ಯರು ಬಿಜೆಪಿ ಜೊತೆ ಹೋಗಲು ಒಪ್ಪಿದ್ದಾರೆ. ಹಾಗಾಗಿ ಜಿ.ಪಂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.