ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

Update: 2019-02-22 19:01 GMT

ಪಾಂಡವಪುರ, ಫೆ.22: ಗೃಹಿಣಿಯೊಬ್ಬರು ಅನುಮಾನಸ್ಪದವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೀಬಿ ಗ್ರಾಮದಲ್ಲಿ ನಡೆದಿದೆ. 

ತಮ್ಮಯ್ಯ ಎಂಬವರ ಪತ್ನಿ ಶಿಲ್ಪ(25) ಎಂಬಾಕೆ ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಶಿಲ್ಪಾಳ ಆತ್ಮಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಯುವತಿಯ ತಂದೆ ಮಹದೇವಪ್ಪ ಅವರು 'ನನ್ನ ಮಗಳು ಶಿಲ್ಪಳನ್ನು ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ' ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರು ತಾಲೂಕಿನ ಸೊಳ್ಳೆಪುರ ಗ್ರಾಮದ ನಿವಾಸಿ ಮಹದೇವಪ್ಪನವರ ಮಗಳಾದ ಶಿಲ್ಪಳನ್ನು ಬೇಬಿ ಗ್ರಾಮದ ಕುಮಾರ್ ಅವರ ಪುತ್ರ ತಮ್ಮಯ್ಯ ಎಂಬವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.

ಮದುವೆ ಸಂದರ್ಭದಲ್ಲಿ 2 ಲಕ್ಷ ರೂ. ನಗದು ಹಾಗೂ 10 ಗ್ರಾಂ  ಚಿನ್ನವನ್ನು ನೀಡಲಾಗಿತ್ತು. ಶಿಲ್ಪಳಿಗೆ ಒಂದುವರೆ ವರ್ಷದ ಒಂದು ಗಂಡು ಮಗುವಿದೆ. ಆಗಾಗ್ಗೆ ಶಿಲ್ಪಳಿಗೆ ಪತಿಯ ಮನೆಯವರು ವರದಕ್ಷಿಣೆ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಅದರಿಂದಲೇ ನನ್ನ ಮಗಳು ಆಕೆಯ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ದರಿಂದ ನನ್ನ ಮಗಳ ಸಾವಿಗೆ ಪತಿ ತಮ್ಮಯ್ಯ, ಮಾವ ಕುಮಾರ್, ಅತ್ತೆ ನಾಗಮ್ಮ ಅವರೇ ನೇರ ಕಾರಣ ಎಂದು ದೂರು ನೀಡಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿಲ್ಪಳ ಗಂಡನ ಮನೆಯವರು ತಲೆಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News