ವಿಜಯಪುರ: ಸಹೋದರರಿಬ್ಬರ ಬರ್ಬರ ಹತ್ಯೆ

Update: 2019-02-23 04:45 GMT

ವಿಜಯಪುರ, ಫೆ.23: ಅಣ್ಣ-ತಮ್ಮಂದಿರನ್ನು ಮಾರಕಾಯುಧಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ನಗರದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಕೊಲೆಗೀಡಾದವರನ್ನು ಸಲೀಂ ಕುಚಬಲ್(33) ಹಾಗೂ ರಝಾಕ್ ಕುಚಬಲ್(28) ಎಂದು ಗುರುತಿಸಲಾಗಿದೆ.

ನಗರದ ಜಯ ಕರ್ನಾಟಕ ಕಾಲನಿಯಲ್ಲಿ ಸಲೀಂ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದರೆ, ತಮ್ಮ ರಝಾಕ್ ಅವರನ್ನು ಗಾಂಧಿ ವೃತ್ತದ ಸರಕಾರಿ ಕಾಲೇಜು ಬಳಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ.

ನಿನ್ನೆ ತಡರಾತ್ರಿ ಈ ಕೊಲೆಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ನಗರದ ಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತ ಸಹೋದರರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೆನ್ನಲಾಗಿದೆ.

ವಿಜಯಪುರ ನಗರದ ಗಾಂಧಿ ಚೌಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News