ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಮ ವಿಶಿಷ್ಠ ಸೇವಾ ಪದಕ

Update: 2019-03-14 12:29 GMT

ಹೊಸದಿಲ್ಲಿ, ಮಾ.14: ಭೂ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಸೇನೆಯ ಉನ್ನತ ಪುರಸ್ಕಾರ  ಪರಮ ವಿಶಿಷ್ಠ ಸೇವಾ ಪದಕ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 12 ಸೇನಾಧಿಕಾರಿಗಳು ಹಾಗೂ 5 ಯೋಧರಿಗೆ ಮಿಲಿಟರಿ ಪದಕ ನೀಡಿ ಗೌರವಿಸಲಾಯಿತು.

ಹುತಾತ್ಮ ಯೋಧರಾದ ಆರ್ಮಿ ಸಿಪಾಯಿ ವರ್ಮಾ ಪಾಲ್ ಸಿಂಗ್ , ಸಿಆರ್ ಪಿಎಫ್ ಜವಾನ ರಾಜೇಂದ್ರ ನೈನ್ ಮತ್ತು ರವೀಂದ್ರ ಬಾಬನ್ ಧನವಾಡೆಗೆ  ದೇಶದ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ 'ಕೀರ್ತಿಚಕ್ರ ವನ್ನು ಮರಣೋತ್ತರವಾಗಿ ನೀಡಲಾಗಿದೆ.  20 ಜಾಟ್ ರೆಜಿಮೆಂಟ್ ನ ಮೇಜರ್  ತುಷಾರ್ ಗೌಬ  ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News